Tuesday, February 9, 2021

ಕನ್ನಡ ಚಿತ್ರರಂಗದ ಉದಯೋನ್ಮುಖ ಯುವ ಪ್ರತಿಭೆ ಉಮೇಶ್ ಬಗ್ಗೆ ನಿಮಗೆಷ್ಟು ಗೊತ್ತು...!

ಹೌದು ಸ್ನೇಹಿತರೆ ಪಾಂಡವಪುರ ತಾಲೂಕಿನ ಚಿನಕುರಳಿ ಎಂಬ ಗ್ರಾಮದ ಪಕ್ಕ ಕುಂಬಾರಕೊಪ್ಪಲು ಎಂಬ ಸಣ್ಣ ಹಳ್ಳಿಯಲಿ ಬಡಕುಟುಂಬದಲ್ಲಿ ಹುಟ್ಟಿದ ಉಮೇಶ್ ಅವರು, ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಸಮಸ್ಯೆ ಎದುರಿಸಿದರು. ಎಂಟು ವರ್ಷದ ಹಿಂದೆ ಬೆಂಗಳೂರಿಗೆ ಮುಖಮಾಡಿದ ಈ ಕುಟುಂಬ, ಉಮೇಶ್ ಅವರಿಗಿದ್ದ ಕಲಾ ಆಸಕ್ತಿ, ಸಾಕಷ್ಟು ಕಷ್ಟದ ಕೆಲಸಗಳನ್ನೆಲ್ಲ ಮಾಡಿಸಿ ಬಿಟ್ಟಿತು. ಹೌದು ಉಮೇಶ್ ಅವರು ಶಾಲಾ ಕಾಲೇಜು ದಿನಗಳಲ್ಲೇ ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದು, ನಾಟಕದಲ್ಲಿ ಸಹ ಅಭಿನಯಿಸುತ್ತಿದ್ದರಂತೆ.

ಹೀಗೆ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದರು ಉಮೇಶ್ ಅವರು. ಮತ್ತು ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲೇಬೇಕು, ತಾನು ದೊಡ್ಡ ಸ್ಟಾರ್ ನಟನಾಗಬೇಕು ಎನ್ನುವ ಅಭಿಲಾಷ ಕನಸನ್ನು ಹೊತ್ತು, ಈಗಲೂ ಸಹ ಸಿನಿಮಾರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಸಾಕಷ್ಟು ಕಷ್ಟ ಪಡುತ್ತಿದ್ದಾರೆ ಎನ್ನಲಾಗಿದೆ. ಹಾಗೆ ಉಮೇಶ್ ಅವರು ಆರಂಭದ ಹಂತದಲ್ಲಿ ಥಿಯೇಟರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ನೆಲೆಯೂರುವ ಉದ್ದೇಶದಿಂದ ಕನ್ನಡ ಸಿನಿಮಾಗಳನ್ನು ಪ್ರಮೋಷನ್ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. 

ತದನಂತರ ತಮ್ಮದೇ ಆದ ಆನ್ಲೈನ್ ಪ್ರಮೋಷನ್ ಸಂಸ್ಥೆಯನ್ನು ಕೂಡ ಸ್ಥಾಪಿಸಿ ಕೊಳ್ಳುತ್ತಾರೆ ಉಮೇಶ್. ಹೌದು ಆನ್ಲೈನ್ ಪ್ರಚಾರಕರ್ತರಾದ ಉಮೇಶ್ ಅವರು ಸದ್ಯ ನೂರಕ್ಕಿಂತ ಹೆಚ್ಚು ಸಿನಿಮಾಗಳನ್ನು ಪ್ರಮೋಷನ್ ಮಾಡಿಕೊಟ್ಟಿದ್ದಾರೆ, ಹಾಗೇ ದೊಡ್ಡ ದೊಡ್ಡ ಸಿನಿಮಾಗಳನ್ನು ಕೂಡ ಇವರೇ ಪ್ರಮೋಷನ್ ಮಾಡಲಿದ್ದಾರೆ. ಇಂದು ಯುವ ಕಲಾವಿದ ಉಮೇಶ್ ಅವರ ಹುಟ್ಟುಹಬ್ಬದ ದಿನ, ಹಾಗಾಗಿ ನೀವು ಕೂಡ ಈ ಯುವ ಕಲಾವಿದನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ. ಸಿನಿಮಾರಂಗದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಲಿ ಎಂದು ಆಶಿಸಿ ಕಾಮೆಂಟ್ ಮಾಡಿ ತಿಳಿಸಿ. ಜೊತೆಗೆ ಇನ್ನೇನು ಹೊಸ ಸಿನಿಮಾದ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ ಉಮೇಶ್ ಅವರು, ಮತ್ತು ಎಲ್ಲರ ಆಶಯ ಕೂಡ ಇದಾಗಿದೆ ಉಮೇಶ್ ಅವರಿಗೆ ಒಳ್ಳೆಯದಾಗಲಿ.  ಧನ್ಯವಾದಗಳು.....


Wednesday, January 13, 2021

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಕಬ್ಜಕ್ಕೆ ಸುದೀಪ್ ಆಗಮನ..! ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದ ಚಿತ್ರತಂಡ

ಹೌದು ಕೆಜಿಎಫ್ ನಂತರ ಮತ್ತೊಂದು ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾದ ಕಬ್ಜಾ ಸಿನಿಮಾ ಈಗಾಗಲೇ ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಸುದ್ದಿ ಆಗಿದ್ದು, ಚಿತ್ರ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ. ದಿನೇದಿನೇ ಕಬ್ಜಾ ಚಿತ್ರತಂಡದ ಮೇಲೆ ಮತ್ತು ಕಬ್ಜಾ ಸಿನಿಮಾದ ಮೇಲೆ ಪ್ರೀತಿ ಹೆಚ್ಚಾಗುತ್ತಿದ್ದು, ಕಬ್ಜಾ ಸಿನಿಮಾ ಹೀಗೆ ಮೂಡಿಬರಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಕಬ್ಜಾ ಚಿತ್ರತಂಡವೂ ಇದೇ ಸಂಕ್ರಾಂತಿ ಹಬ್ಬಕ್ಕೆ ಹೊಸ ಸರ್ಪ್ರೈಸ್ ಸುದ್ದಿಯೊಂದನ್ನು ನೀಡುತ್ತಿದ್ದೇವೆ ಎಂದು ಹೇಳಿಕೊಂಡಿತ್ತು.

ಅದೇ ರೀತಿ ಇದೀಗ ಕಬ್ಜಾ ಅಂಕಣಕ್ಕೆ ನಮ್ಮ ಕಿಚ್ಚ ಸುದೀಪ್ ಅವರು ಗೇಮ್ ನಲ್ಲಿ ಇರುವುದಾಗಿ ತಿಳಿದು ಬಂದಿದೆ. ಹಾಗೆ ಈ ವಿಚಾರ ತಿಳಿದು ಕಿಚ್ಚನ ಫ್ಯಾನ್ಸ್ ಗಳು ಫುಲ್ ಫಿದಾ ಆಗಿದ್ದಾರೆ. ಹಾಗೆ ಕಬ್ಜಾ ಸಿನಿಮಾದ ನಿರ್ದೇಶಕ ಆರ್ ಚಂದ್ರು ಅವರ ಕೈಚಳಕ ಸಿನಿಮಾದಲ್ಲಿ ಹೇಗಿರಲಿದೆ ಎಂದು ಅಭಿಮಾನಿಗಳು ಈಗಲೇ ಲೆಕ್ಕ ಹಾಕುತ್ತಿದ್ದಾರೆ. ಹೌದು ಭಾರತದ್ಯಾಂತ ಕೆಜಿಎಫ್ ಚಿತ್ರವು ಹೇಗೆ ಯಶಸ್ವಿಯಾಯಿತೋ, ಅದೇ ನಿಟ್ಟಿನಲ್ಲಿ ಇದೀಗ ರೆಟ್ರೋ ಸ್ಟೈಲಲ್ಲಿ ಸುದೀಪ್ ಎಂಟ್ರಿಯಾಗಿದ್ದು ಭಾರ್ಗವ ಭಕ್ಷಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ. ಹಾಗೇನೆ ನೀವು ಕೂಡ ಪ್ಯಾನ್ ಇಂಡಿಯಾ ಕಬ್ಜಾ ಸಿನಿಮಾಕ್ಕೆ ಕಾಯುತ್ತಿದ್ದರೆ ತಪ್ಪದೇ ಶೇರ್ ಮಾಡಿ, ಮತ್ತು ಇಂದು ಕಬ್ಜ ಚಿತ್ರತಂಡ ಬಿಡುಗಡೆ ಮಾಡಿರುವ ನ್ಯೂ ಪೋಸ್ಟರ್ ಲುಕ್ ಹೇಗಿದೆ ಎಂದು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು....

Sunday, January 10, 2021

ಇದೆ ಸಂಕ್ರಾಂತಿ ಹಬ್ಬದ ದಿನ, ಬಿಗ್ ನ್ಯೂಸ್ ತರುತ್ತಿರುವ ಪ್ಯಾನ್ ಇಂಡಿಯಾ ಕಬ್ಜ ಚಿತ್ರತಂಡ..!

ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ಮೈಲುಗಲ್ಲು ಸಾಧಿಸುವ ನಿಟ್ಟಿನಲ್ಲಿ ಪ್ಯಾನ್ ಇಂಡಿಯಾ ಚಿತ್ರ ಕಬ್ಜ ಈಗಾಗಲೇ ತನ್ನ ಭಾಗದ ಶೂಟಿಂಗ್ ಮುಗಿಸಿಕೊಂಡು ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಮೂಡಿಸುವಂತೆ ಮಾಡಿದೆ. ಮತ್ತು ಕಬ್ಜ ಚಿತ್ರದ ನಿರ್ದೇಶಕ ಆರ್ ಚಂದ್ರು ಅವರು ಕೂಡ ಸಕ್ಕತ್ತಾಗಿ ತಮ್ಮ ನಿರ್ದೇಶನ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಲು ಸಜ್ಜಾಗಿದ್ದಾರೆ. ಹಾಗೇನೆ ಈ ಚಿತ್ರ ಕೂಡ ಕನ್ನಡದ ಇನ್ನೊಂದು ಯಶಸ್ವಿ ಚಿತ್ರ ಆಗುವುದರಲ್ಲಿ ಎರಡು ಮಾತಿಲ್ಲ, ಯಾಕೆಂದರೆ ಇಲ್ಲಿಯವರೆಗೂ ಯಾರೂ ಮಾಡದ ರೀತಿ ಸಿನಿಮಾ ಮೂಡಿ ಬರಲಿದೆಯಂತೆ.

ಕನ್ನಡದ ಕೆಜಿಎಫ್ ರೀತಿಯೇ ಈ ಕಬ್ಜ ಸಿನಿಮಾ ಕೂಡ ಸೌಂಡ್ ಮಾಡುವುದು ಪಕ್ಕಾ ಆಗಿದೆ, ಹಾಗೆ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರರವರು ಕೂಡ, ಈ ಕಬ್ಜ ಸಿನಿಮಾದಲ್ಲಿ ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದು, ಅಂಡರ್ವರ್ಲ್ಡ್ ಹೇಗಿರಲಿದೆ ಎಂಬುದಾಗಿ ತೋರಿಸಲು ಸಜ್ಜಾಗಿದ್ದಾರಂತೆ. ಮತ್ತು ಅಭಿಮಾನಿಗಳು ಕಾತುರದಿಂದ ಕಾಯುವ ಹಾಗೆ ಈ ಚಿತ್ರದ ಕೆಲ ಸ್ಟಿಲ್ಸ್ ಗಳು ಮತ್ತು ಶೂಟಿಂಗ್ ಸ್ಪಾಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಕೂಡ ಆಗಿವೆ.

ಹಾಗೇನೇ ಚಿತ್ರತಂಡ ಇದೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ದಿನಾಂಕ 14-01- 2021 ಕ್ಕೆ, ಹೊಸ ಸರ್ಪ್ರೈಸ್ ಸುದ್ದಿ ನೀಡಲಿದ್ದು, ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಈ ಕಬ್ಜ ಚಿತ್ರತಂಡ ಯಾವ ಸುದ್ದಿ ಹೇಳಬಹುದು ಎಂಬುದು ನಿಮಗೂ ತಿಳಿದಿದ್ದರೆ ತಪ್ಪದೇ ಶೇರ್ ಮಾಡಿ, ಕಮೆಂಟ್ ಮಾಡಿ, ಕಬ್ಜ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು  ಶುಭಾಶಯ ತಿಳಿಸಿ  ಧನ್ಯವಾದಗಳು...